ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು-ಕಫಕ್ಕೆ ಸರಳವಾದ ಮನೆ ಮದ್ದು

Table of Content

ಮಳೆಗಾಲ ಬಂತೆಂದರೆ ಸಾಕು ಶೀತ, ಜ್ವರ, ಕೆಮ್ಮುವಿನಂತಹ ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತದೆ. ಪ್ರಕೃತಿಯು ಒಮ್ಮೆಗೆ ಏರುಪೇರಾಗುವಾಗ ನಮ್ಮ ಆರೋಗ್ಯದ ಪರಿಸ್ಥಿತಿಯೂ ಏರುಪೇರಾಗುತ್ತದೆ. ಅದರಲ್ಲೂ ಎಳೆಯ ಮಕ್ಕಳಿಗಂತೂ ಈ ಆರೋಗ್ಯ ಸಮಸ್ಯೆಗಳು ಬಹು ಬೇಗನೇ ಅಂಟಿಕೊಳ್ಳುತ್ತದೆ.ಅದಕ್ಕೆ ನಾವೇ ಮನೆ ಮದ್ದು ಮಾಡಬಹುದು.

ಆರೋಗ್ಯ ಸಮಸ್ಯೆಗಳು ಎದುರಾದಾಗ ನಾವು ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಪಡೆದು ಔಷಧಿ ತರುವುದು ಸರ್ವೇ ಸಾಮಾನ್ಯ ವಿಷಯ. ಆದರೆ ಪುಟಾಣಿ ಮಕ್ಕಳಿಗೆ ಈ ಔಷಧಿ ದಿನಾ ಕೊಡುವುದು ಅಷ್ಟೊಂದು ಒಳ್ಳೆಯದಲ್ಲ. ಮನೆಯಂಗಳವನ್ನೇ ಆಸ್ಪತ್ರೆಯನ್ನಾಗಿ ಮಾಡಿಕೊಂಡರೆ ಮಕ್ಕಳ ಶೀತ, ಕೆಮ್ಮು, ಕಫದ ಸಮಸ್ಯೆಗಳನ್ನು ನಾವೇ ನಿವಾರಣೆ ಮಾಡಬಹುದು.

ಇದನ್ನೂ ಓದಿ: ಏನಿದು ಡೆಂಗ್ಯೂ ಜ್ವರ ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ?

ತುಳಸಿ ರೋಗ ನಿರೋಧಕ ಶಕ್ತಿ

ತುಳಸಿ ಗಿಡ ಇಲ್ಲದ ಮನೆಯಂಗಳವುಂಟೇ..? ಹಿಂದೂ ಸಂಸ್ಕೃತಿಯಲ್ಲಿ ಹೆಣ್ಮಕ್ಕಳ ಮೊದಲ ಪೂಜೆ ತುಳಸಿ ಮಾತೆಗೆ ಆಗಿರುತ್ತದೆ. ಇದೇ ತುಳಸಿ ಗಿಡಗಳು ಮಳೆ ಬಂತೆಂದರೆ ಮನೆಯ ಸುತ್ತಲೂ ಹಚ್ಚ ಹಸಿರಾಗಿ ಬೆಳೆಯ ತೊಡಗುತ್ತದೆ. ಈ ತುಳಸಿ ಗಿಡದ ಘಮವೇ ಅದೆಷ್ಟೋ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅದರ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ಅಥವಾ ಹಾಗೆಯೇ ಜಜ್ಜಿ ರಸ ತೆಗೆದು ಮಕ್ಕಳಿಗೆ ನಿಯಮಿತವಾಗಿ ಕುಡಿಸುತ್ತಿದ್ದರೆ ಶೀತ, ಕೆಮ್ಮು, ಕಫದ ಸಮಸ್ಯೆಗಳು ನಿವಾರಣೆಯಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹತ್ತಾರು ತುಳಸಿ ಎಲೆಗಳು, ಕೆಂಡದಲ್ಲಿ ಬಿಸಿ ಮಾಡಿದ ಈರುಳ್ಳಿಯ ಸಣ್ಣ ತೊಳೆ, ಬಿಸಿ ನೀರಿನಲ್ಲಿ ತೊಳೆದು ಸಣ್ಣ ತುಂಡು ಶುಂಠಿ, ಅರ್ಧ ವೀಳ್ಯದೆಲೆಯನ್ನು ಒಟ್ಟು ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಬೇಕು. ನಂತರ ಶುಭ್ರವಾದ ಒಣ ಬಟ್ಟೆಯಲ್ಲಿ ಈ ರಸವನ್ನು ಹಿಂಡಿ ತೆಗೆಯಬೇಕು. ಬೇಕಾದರೆ ಅರ್ಧ ಅಥವಾ ಒಂದು ಕರಿ ಮೆಣಸಿನ ಕಾಳನ್ನೂ ಸೇರಿಸಿಕೊಳ್ಳಬಹುದು. ಆ ರಸಕ್ಕೆ ಒಂದು ಹನಿ ಶುದ್ಧ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಬೆಳಿಗ್ಗೆ ರಾತ್ರಿ ಎರಡೆರಡು ಎಂ.ಎಲ್ ಅಷ್ಟು ಕುಡಿಸಿದರೆ ಕೆಮ್ಮು ಕಫದ ಬಾಧೆ ನಿವಾರಣೆಯಾಗುತ್ತದೆ.

ಮನೆ ಮದ್ದು : ವೀಳ್ಯದೆಲೆ ಕಷಾಯ ಕಫದ ಸಮಸ್ಯೆ ಶಮನ

ವೀಳ್ಯದೆಲೆಗ್ರಾಮೀಣ ಪ್ರದೇಶದಲ್ಲಿ ವೀಳ್ಯದೆಲೆ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತದೆ. ವಯಸ್ಸಾದವರು, ಕೆಲಸ ಮಾಡುವವರು ಬಾಯಲ್ಲಿ ಎಲೆಯಡಿಕೆ ಹಾಕಿ ಜಗಿಯುತ್ತಲೇ ಇರುತ್ತಾರೆ. ಈ ವೀಳ್ಯದೆಲೆ ವಿಶೇಷವಾಗಿ ಕಫ ಶಮನ ಮಾಡುವ ಗುಣ ಹೊಂದಿದೆ. ಪುಟ್ಟ ಮಕ್ಕಳಿಗೆ ವೀಳ್ಯದೆಲೆಯನ್ನು ಸಣ್ಣಗೆ ಬಾಡಿಸಿ ರಸ ತೆಗೆದು ಕುಡಿಸಬೇಕು. ಆದರೆ ದೊಡ್ಡವರಿಗೆ ವೀಳ್ಯದೆಲೆಯ ಕಷಾಯ ಪರಿಣಾಮಕಾರಿಯಾಗಿದೆ. ಒಂದು ಲೋಟ ನೀರಿಗೆ ಎರಡು ವೀಳ್ಯದೆಲೆ ಹಾಕಿ ಅರ್ಧ ಲೋಟ ಆಗುವಷ್ಟು ಹೊತ್ತು ಕುದಿಸಬೇಕು. ನಂತರ ಸೋಸಿ ಉಗುರು ಬಿಸಿ ಇರುವಾಗಲೇ ಕುಡಿಯಬೇಕು. ಕೆಲ ದಿನ ಈ ಔಷಧಿ ಕಷಾಯವನ್ನು ಸೇವಿಸಿದರೆ ಕಫದ ಸಮಸ್ಯೆ ಶಮನವಾಗುತ್ತದೆ.

ಇದನ್ನೂ ಓದಿ: ಪಾಲಕ್ ಎಂಬ ಆರೋಗ್ಯ ಪಾಲಕ..

ಶೀತದ ಸಮಸ್ಯೆಯಿಂದ ಗಂಟಲು ನೋವು ಆರಂಭವಾಗುತ್ತದೆ. ಈ ರೀತಿ ಆದಾಗ ನಾವು ಕರಿ ಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಅಥವಾ ಪಾನಕ ಕುಡಿಯುತ್ತೇವೆ. ಆದರೆ ಇದೇ ಕರಿ ಮೆಣಸಿನ ಕಷಾಯಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬಿಸಿ ಬಿಸಿ ಕಷಾಯವನ್ನು ಅರ್ಧ ಲೋಟವಾದರೂ ಕುಡಿಯಿರಿ. ಕರಿಮೆಣಸಿನ ಖಾರ ಹಾಗೂ ಉಪ್ಪು ಬಿಸಿ ಬಿಸಿಯಾಗಿ ಗಂಟಲಲ್ಲಿ ಇಳಿದರೆ ಗಂಟಲು ನೋವು ಮಾಯವಾಗುತ್ತದೆ.

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹಿರಿಯರು ಹೇಳಿದಂತೆ ಹಿತ್ತಲ ಗಿಡವೇ ಮದ್ದು. ಹಿರಿಯರು ಹೇಳುವ ಅನುಭವದ ಕೆಲವು ಮನೆ ಮದ್ದುಗಳನ್ನು ನಾವೂ ನಮ್ಮ ಬದುಕಿನಲ್ಲಿ ಪ್ರಯೋಗಿಸುತ್ತಾ ಇದ್ದರೆ, ಅದರಿಂದ ಉತ್ತಮ ಫಲಿತಾಂಶ ನಮಗೆ ಸಿಕ್ಕರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಇನ್ನೇನಿದೆ ಅಲ್ವಾ..? ಮನೆ ಮದ್ದುಗಳನ್ನು ಅಗತ್ಯವಿದ್ದಾಗ ಬಳಸೋಣ. ಮುಂದಿನ ಪೀಳಿಗೆಗೂ ಮನೆ ಮದ್ದುಗಳ ಘಮವನ್ನು ರವಾನಿಸುವವರು ನಾವಾಗೋಣ.

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x