ಜಗತ್ತನ್ನೇ ನಡುಗಿಸಿದ “ಬ್ಲೂಸ್ಕ್ರೀನ್ ಆಫ್ ಡೆತ್”

Table of Content

ಜಾಗತಿಕ ತಂತ್ರಜ್ಞಾನ ವೈಫಲ್ಯದಿಂದಾಗಿ ಜುಲೈ 19 ನೇ ಶುಕ್ರವಾರ ಇಡೀ ಜಗತ್ತು ಅಸ್ತವ್ಯಸ್ತಗೊಂಡಿದೆ. ಮೈಕ್ರೋಸಾಫ್ಟ್ ಸಾಫ್ಟವೇರ್ ಅಲ್ಲಿ ಉಂಟಾದ ಈ ತಾಂತ್ರಿಕ ವ್ಯತ್ಯಯ “ಬ್ಲೂಸ್ಕ್ರೀನ್ ಆಫ್ ಡೆತ್” ದಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿಮಾನ ಸೇವೆಯಿಂದ ಹಿಡಿದು, ಬ್ಯಾಂಕಿಂಗ್, ರೈಲ್ವೆ ಸೇವೆ, ಮಾಧ್ಯಮ ವಲಯ, ಆರೋಗ್ಯ ಸೇವೆಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ಇದರಿಂದಾಗಿ ಜಗತ್ತಿನಾದ್ಯಂತ ಹಲವು ವಿಮಾನಗಳ ಹಾರಾಟ ಸ್ಥಗಿತ ಅಥವಾ ವಿಳಂಬವಾಗಿದೆ. ಇದರಿಂದಾಗಿ ಪ್ರಯಾಣಿಕರ ಪರದಾಟ ಹೇಳತೀರದಂತಾಗಿತ್ತು.

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಇಂಡಿಗೋ, ಸ್ಪೈಸ್ ಜೆಟ್, ಅಕಾಸಾ ಏರ್, ವಿಸ್ತಾರಾ ಕಂಪನಿಗಳ ಟಿಕೆಟ್ ಬುಕ್ಕಿಂಗ್, ಚೆಕ್ ಇನ್, ಸಂಚಾರ ಮಾಹಿತಿಗಳ ಸೇವೆ ಒದಗಿಸಲು ತುಂಬಾ ಕಷ್ಟವಾಯಿತು. ಆದ್ದರಿಂದ ಪ್ರಯಾಣಿಕರ ಚೆಕ್ ಇನ್ ಪ್ರಕ್ರಿಯೆಯನ್ನು ಅಧಿಕಾರಿಗಳು ಮಾನ್ಯುಯಲ್ ಆಗಿ ನೆರವೇರಿಸಬೇಕಾಯಿತು. ವರದಿಯಂತೆ ಭಾರತದಲ್ಲಿ 140 ವಿಮಾನಗಳ ಪ್ರಮಾಣದಲ್ಲಿ ವ್ಯತ್ಯಯ ಹಾಗೂ ರದ್ದತಿ ಉಂಟಾಯಿತು.

ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮೈಕ್ರೋಸಾಫ್ಟ್ ಕ್ರ್ಯಾಶ್ “ಬ್ಲೂಸ್ಕ್ರೀನ್ ಆಫ್ ಡೆತ್”ಸಮಸ್ಯೆ ಕೋಲಾಹಲ ಎಬ್ಬಿಸಿದೆ. ಅಮೇರಿಕಾದ ಡೆಲ್ಟ, ಅಮೆರಿಕನ್, ಅಲಿಗೆಂಟ್ ಕಂಪನಿಗಳ ವಿಮಾನಯಾನದಲ್ಲಿ ಸಂಪೂರ್ಣ ಸ್ಥಗಿತ ಉಂಟಾಗಿದೆ. ಉಳಿದ ವಿಮಾನಯಾನಗಳಲ್ಲಿ ವ್ಯತ್ಯಯ ಉಂಟಾಗಿ ಕೆಲವೆಡೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ನಿದ್ದೆಗೆ ಜಾರಿದ ಪ್ರಸಂಗಗಳು ಕಂಡು ಬಂದವು.

ಇನ್ನು ಕೆಲವು ದೇಶಗಳ ಮಾಧ್ಯಮ ವಲಯದಲ್ಲಿ ತೀವ್ರ ಹೊಡೆತ ಉಂಟಾಗಿದೆ. ಸುದ್ಧಿ ಮಾಧ್ಯಮಗಳಲ್ಲಿ ನೇರ ಪ್ರಸಾರ ನೀಡುತ್ತಿದ್ದ ನಿರೂಪಕರು ಈ ತಾಂತ್ರಿಕ ವ್ಯತ್ಯಯದಿಂದಾಗಿ ಅರ್ಧದಲ್ಲೇ ಎದ್ದು ಹೋಗುವ ಪ್ರಮೇಯ ಎದುರಾಯಿತು.

ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ

ಕ್ರೌಡ್ ಸ್ಟ್ರೈಕ್ ಸಮಸ್ಯೆ ಎಂದರೇನು?


ಕ್ರೌಡ್ ಸ್ಟ್ರೈಕ್ ಅಮೇರಿಕಾದ 83 ಬಿಲಿಯನ್ ಡಾಲರ್ ಮೌಲ್ಯದ ಸೈಬರ್ ಭದ್ರತಾ ಕಂಪನಿಯಾಗಿದ್ದು ಜಗತ್ತಿನಾದ್ಯಂತ ಸುಮಾರು 20 ಸಾವಿರ ಚಂದಾದಾರರನ್ನು ಹೊಂದಿದೆ.
ಕ್ರೌಡ್ ಸ್ಟ್ರೈಕ್ ಎಂಬುದು ಬಳಕೆದಾರರಿಗೆ ಸೈಬರ್ ದಾಳಿಯಿಂದ ಹಿಡಿದು ಬೇರೆ ಬೇರೆ ರೀತಿಯ ಸೈಬರ್ ಸುರಕ್ಷತೆ ನೀಡುವ ಒಂದು ಸಂಸ್ಥೆ. ಮೈಕ್ರೋಸಾಫ್ಟ್ ನ ಕ್ಲೌಡ್ ಸೇವೆಗಳಿಗೆ ಈ ಸಾಫ್ಟವೇರ್ ಭದ್ರತೆಯನ್ನು ಒದಗಿಸುತ್ತದೆ. ಇಂತಹ ಭದ್ರತೆಯನ್ನು ಒದಗಿಸುವ ಕ್ರೌಡ್ ಸ್ಟ್ರೈಕ್ ಸಾಫ್ಟ್ವೇರ್, ತನ್ನಲ್ಲಿನ ಒಂದು ಸಮಸ್ಯೆಯನ್ನು ಬಗೆಹರಿಸಿ ಸಾಫ್ಟವೇರ್ ಅಪ್ಡೇಟ್ ಮಾಡಿದಾಗ ಮತ್ತೊಂದು ಸಮಸ್ಯೆ ಉಂಟಾಗಿ ಇಡೀ ಮೈಕ್ರೋಸಾಫ್ಟ್ ಕ್ಲೌಡ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಅಂದರೆ ಕ್ರೌಡ್ ಸ್ಟ್ರೈಕ್ ಕಂಪನಿ ಬಳಕೆ ಮಾಡುವಂತಹ ಫಾಲ್ಕನ್ ಸೆನ್ಸಾರ್ ಎಂಬ ಸಾಫ್ಟವೇರ್ ಮೈಕ್ರೋಸಾಫ್ಟ್ ವಿಂಡೋಸ್ ನ ಕ್ರ್ಯಾಶ್ ಗೆ ಕಾರಣವಾಗಿದೆ‌. ಕ್ರೌಡ್ ಸ್ಟ್ರೈಕ್ ಸಂಸ್ಥೆಯ ಸಿಇಒ ಜಾರ್ಜ್ ಕರ್ಟ್ಜ್ ಮಾತನಾಡಿ, ಈಗ ಆಗಿರುವ ಸಮಸ್ಯೆ ಸೈಬರ್ ದಾಳಿಯಲ್ಲ, ಆದಷ್ಟು ಬೇಗ ಈ ತೊಂದರೆಯನ್ನು ನಿವಾರಿಸುವುದಾಗಿ ಹೇಳಿದ್ದಾರೆ.

ಏನಿದು “ಬ್ಲೂಸ್ಕ್ರೀನ್ ಆಫ್ ಡೆತ್” ?


ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಾಗ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಪರದೆ ಮೇಲೆ ಮೂಡುವ ಸಂದೇಶಕ್ಕೆ “ಬ್ಲೂಸ್ಕ್ರೀನ್ ಆಫ್ ಡೆತ್”ಎನ್ನುವರು. ಆಪರೇಟಿಂಗ್ ಸಿಸ್ಟಮ್ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು ಆಗದೇ ಹೋದಾಗ ಈ ಸಂದೇಶ ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಈ ರೀತಿ ಸಿಸ್ಟಮ್ ಕ್ರ್ಯಾಶ್ ಆದಾಗ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ತಂತಾನೇ ಆಫ್ ಆಗಿ ಬಿಡುತ್ತದೆ. ನಂತರ ಪುನಃ ರಿಸ್ಟಾರ್ಟ್ ಆಗುತ್ತದೆ. ಈ ವೇಳೆ ಸೇವ್ ಮಾಡದೆ ಇದ್ದ ಎಲ್ಲಾ ದಾಖಲೆಗಳು ಅಳಿಸಿ ಹೋಗುತ್ತದೆ. ಜಗತ್ತು ನಿಂತಿರುವುದು ತಂತ್ರಜ್ಞಾನದ ಮೇಲೆ. ಒಮ್ಮೊಮ್ಮೆ ಈ ತಂತ್ರಜ್ಞಾನಗಳು ನಮ್ಮನ್ನು ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ಏನೇ ಆದರೂ ಸಮಸ್ಯೆ ಮಾತ್ರ ಜನರ ಬೆನ್ನು ಬಿಡದು.

ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x