ಮಳೆಗಾಲದ ರಜೆ ಮಕ್ಕಳ ಪಾಲಿಗೆ ಸಜೆಯಾಗದಿರಲಿ

Table of Content

ಮಳೆಗಾಲ ಬಂತೆಂದರೆ ಸಾಕು. ಮಕ್ಕಳ ಹರುಷಕ್ಕೆ ಪಾರವೇ ಇಲ್ಲ. ದೊಪ್ಪನೆ ಸುರಿಯುವ ಮಳೆಯ ಅವಾಂತರಗಳನ್ನು ತಡೆಯಲು ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತದೆ. ಮಳೆಗಾಲದಲ್ಲಿ ಮಳೆ ಬಾರದೆ ಇದ್ದರೆ ಆದೀತೆ..? ಮಳೆಗಾಲದಲ್ಲಿ ಮಳೆ ಬರುವುದು ಸರ್ವೇ ಸಾಮಾನ್ಯ. ಆದರೆ ಮನುಷ್ಯ ಅವೈಜ್ಞಾನಿಕ ರೀತಿಯಲ್ಲಿ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯದ ಪ್ರತಿಫಲವಾಗಿ ಪ್ರಕೃತಿ ವಿಕೋಪಗಳು ಎದುರಾಗುತ್ತಲೇ ಇರುತ್ತದೆ. ಅತಿವೃಷ್ಟಿ, ಭೂ ಕುಸಿತ, ಪಟ್ಟಣಗಳಲ್ಲಿ ಕೃತಕ ನೆರೆ, ಪ್ರವಾಹ, ಕಡಲ್ಕೊರೆತ ಹೀಗೇ ಮಳೆಗಾಲದ ಅವಾಂತರ ಒಂದೆರಡಲ್ಲ. ಇವೆಲ್ಲದರಿಂದ ಪಾರಾಗಲು ಮಕ್ಕಳಿಗೆ ಭರ್ಜರಿ ರಜೆಗಳಂತು ಮಜಾ ಕೊಡುತ್ತಲೇ ಇರುತ್ತದೆ.

ಕಳೆದ ಎರಡು ವಾರಗಳಿಂದ ಮಕ್ಕಳ ಪಾಲಿಗೆ ಶಾಲೆ ಮರೀಚಿಕೆಯಂತಾಗಿದೆ. ಗರಿ ಬಿಚ್ಚಿ ಕುಣಿಯುವ ನಲಿವಿನಂತೆ ಮಕ್ಕಳು ಕೂಡ ಕುಣಿದು ಕುಪ್ಪಳಿಸುತ್ತಲೇ ಇದ್ದಾರೆ. ಆದರೆ ಈ ರಜೆ ಮಕ್ಕಳ ಬದುಕಿಗೆ ಸಜೆಯಾಗದಿರಲಿ. ಪೋಷಕರು ಈ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲೇ ಬೇಕು.

ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ

ಮಳೆಗಾಲದ ರಜೆ ಯಲ್ಲಿ ಪೋಷಕರು ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಕೆಳಗಿನಂತಿವೆ.

  1. ಮಳೆಗಾಲದಲ್ಲಿ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವುದು ಮಕ್ಕಳ ಸುರಕ್ಷತೆಗೆ ವಿನಃ ಮೋಜು ಮಸ್ತಿಗಾಗಿ ಅಲ್ಲವೇ ಅಲ್ಲ ಎಂಬುದನ್ನು ಮಕ್ಕಳು ಹಾಗೂ ಪೋಷಕರು ಮನದಟ್ಟು ಮಾಡಿಕೊಳ್ಳಬೇಕು.
  2. ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಚರಂಡಿ, ನದಿ ತೊರೆಗಳು ತುಂಬಿ ಹರಿಯುತ್ತಿರುತ್ತದೆ. ಪುಟ್ಟ ಮಕ್ಕಳು ಈ ನೀರಿನಲ್ಲಿ ಆಟ ಆಡಲು ಹೋಗುತ್ತಾರೆ. ಅವರಿಗೆ ಈ ನೀರಿನ ರಭಸವನ್ನು ತಡೆಯುವ ತಾಕತ್ತು ಇರುವುದಿಲ್ಲ. ಆದ್ದರಿಂದ ಹೆತ್ತವರು ಈ ರೀತಿ ಮಕ್ಕಳನ್ನು ಆಟವಾಡಲು ಬಿಡಬೇಡಿ.
  3. ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿದ ಬೃಹತ್ ಕಟ್ಟಡಗಳು, ಅತಿಯಾಗಿ ಕೊರೆಯಲ್ಪಟ್ಟ ಕೊಳವೆ ಬಾವಿಗಳ ಪರಿಣಾಮದಿಂದ ಭೂಮಿ ತನ್ನ ಸ್ಥಿಮಿತ ಕಳೆದುಕೊಂಡು ಅಲ್ಲಲ್ಲಿ ಭೂಮಿ ಬಾಯಿ ತೆರೆಯುವುದು, ತಡೆಗೋಡೆ, ಗುಡ್ಡ ಕುಸಿತ, ಮನೆ ಕಟ್ಟಡಗಳು ಕುಸಿಯುತ್ತಿದೆ. ಇದರಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿದ್ದು ಈ ರೀತಿ ಸಮಸ್ಯೆಗಳಿದ್ದಲ್ಲಿ ಮಕ್ಕಳನ್ನು ಅಂತಹ ಸ್ಥಳಗಳಿಗೆ ಹೋಗಲು ಬಿಡದಿರಿ.
  4. ಮನೆಯಂಗಳ ಅಥವಾ ಸುತ್ತಲಿನ ಪ್ರದೇಶ ಅಥವಾ ತೋಟಗಳಲ್ಲಿ ಬಾವಿ ಕರೆಗಳು ನೀರಿನಿಂದ ಸಂಪೂರ್ಣ ತುಂಬಿರುವುದರಿಂದ ಮಕ್ಕಳನ್ನು ಅಪ್ಪಿ ತಪ್ಪಿಯೂ ಇಣುಕಲು ಬಿಡದಿರಿ. ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
  5. ಮನೆಯ ಅಂಗಳದ ಸುತ್ತಲೂ ಮಳೆಯಿಂದಾಗಿ ಪಾಚಿ ಹಿಡಿದು ಕಾಲು ಜಾರಿ ಬಿದ್ದು ಮೂಳೆ ಮುರಿತ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳು ಇಂತಹ ಸ್ಥಳಗಳಲ್ಲಿ ಆಟವಾಡುತ್ತಾ ಓಡಾಡುವುದು ಅಪಾಯಕಾರಿ.
  6. ಮನೆಯ ಸುತ್ತಲೂ ವಿದ್ಯುತ್ ಕಂಬಗಳು, ತಂತಿಗಳು ಹಾದು ಹೋಗಿದ್ದು ಗಾಳಿ ಮಳೆಗೆ ಮರಗಳು ಬಿದ್ದು ತಂತಿ ಕಂಬಗಳು ಬಿದ್ದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳು ಹೋಗುವ ಸ್ಥಳಗಳನ್ನು ಪರಿಶೀಲನೆ ನಡೆಸುವುದು ಒಳಿತು.
  7. ಮಳೆಯ ನೀರಿನಲ್ಲಿ ಮಕ್ಕಳನ್ನು ನೆನೆಯಲು ಬಿಡಬೇಡಿ. ಶೀತ, ಜ್ವರ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
  8. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ಸರೋವರಗಳ ವೀಕ್ಷಣೆಗೆ ಮಕ್ಕಳು, ದೊಡ್ಡವರು ಯಾರೂ ಹೊಗಬೇಡಿ. ಅರೆಕ್ಷಣದ ಖುಷಿಗೆ ಮೈ ಮರೆತರೆ ಜೀವನದುದ್ದಕ್ಕೂ ಖುಷಿಯೇ ಇಲ್ಲವಾದೀತು.
  9. ಶಾಲೆಗಳಿಗೆ ರಜೆ ಇದ್ದು ಆನ್ಲೈನ್ ತರಗತಿಗಳು ನಡೆಯುವುದಾದರೆ ಮಕ್ಕಳನ್ನು ಅದಕ್ಕಾಗಿ ಸಿದ್ಧಪಡಿಸಿ. ಅಥವಾ ಹೆತ್ತವರೇ ಮಕ್ಕಳ ಓದಿಗಾಗಿ ಮುತುವರ್ಜಿ ವಹಿಸಿ ಪಠ್ಯ ವಿಷಯಗಳನ್ನು ಹೇಳಿ ಕೊಡಿ.
  10. ಪ್ರತಿಯೊಂದು ಎಚ್ಚರಿಕೆಯ ವಿಷಯಗಳನ್ನು ಕೂಡ ಮಕ್ಕಳಿಗೆ ಶಾಂತ ರೀತಿಯಲ್ಲಿ ಮನದಟ್ಟು ಮಾಡುವ ಬಹುದೊಡ್ಡ ಜವಾಬ್ದಾರಿಯನ್ನು ಹೆತ್ತವರು ಮಾಡಲೇಬೇಕು. ಇದು ಮಕ್ಕಳ ಸುರಕ್ಷತೆಗೆ ಹೆತ್ತವರು ಇಡುವ ಮೊದಲ ಹೆಜ್ಜೆಯಾಗಿರುತ್ತದೆ.
  11. ಎಲ್ಲೆಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇವೆಯೋ ಆ ಬಗ್ಗೆ ಮಕ್ಕಳು ಹಾಗೂ ಪೋಷಕರು ತುರ್ತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
  12. ಶಾಲೆಗೆ ರಜೆ ಎಂಬ ಕಾರಣಕ್ಕೆ ಮಕ್ಕಳನ್ನು ಹೆಚ್ಚಾಗಿ ಟಿವಿ, ಮೊಬೈಲ್ ಅಲ್ಲಿ ಆಟವಾಡಲು ಬಿಡಬೇಡಿ.

ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ

ಹೆತ್ತವರಿಗೆ ಮಕ್ಕಳೇ ಸಂಪತ್ತು. ದೇಶದ ಭವಿಷ್ಯಕ್ಕೂ ಮಕ್ಕಳೇ ಮುನ್ನುಡಿ ಬರೆಯುವವರು. ಆದ್ದರಿಂದ ಮಳೆಯ ರಜೆ ಮಕ್ಕಳ ಪಾಲಿಗೆ ಎಷ್ಟು ಮಜವೆನಿಸಿವುದೋ ಅಷ್ಟೇ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಇಂದು ಸಿಗುವ ರಜೆ ನಾಳೆ ಸಿಗಬೇಕಾದ ರಜೆಗಳನ್ನು ಕಸಿದುಕೊಳ್ಳುತ್ತದೆ ಎಂಬ ಅರಿವು ಮಕ್ಕಳಿಗಿಲ್ಲ. ಆದ್ದರಿಂದ ಮನೆಯಲ್ಲಿ ಹೆತ್ತವರೊಡನೆ ಖುಷಿ ಖುಷಿಯಾಗಿ ಇರುವುದರೊಂದಿಗೆ ಶಾಲಾ ಪಠ್ಯ ವಿಷಯಗಳನ್ನೂ ಮನನ ಮಾಡಿಕೊಳ್ಳಿ. ಜೊತೆಯಲ್ಲೇ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ.

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x