ಪುತ್ತೂರು : ಪುತ್ತೂರು ವಿಟ್ಲ ರಸ್ತೆಯಲ್ಲಿ ಇಡ್ಕಿದು ಕುಳದ ಅಂಗನಾಡಿ ಸಮೀಪ ಕೆಸರಿನ ಮಣ್ಣಿನಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದ್ದು, ರಾತ್ರಿ 11 ಗಂಟೆಯ ಹೊತ್ತಿಗೆ ನಾಯಿ ಬೊಗಳುವ ಸದ್ದು ಕೇಳಿ ಹತ್ತಿರ ಮನೆಯವರು ಕಿಟಕಿಯಿಂದ ನೋಡಿದಾಗ ಚಿರತೆ ಓಡಾಡುವುದು ಕಂಡಿದ್ದು, ಬೆಳಗ್ಗೆ ಅಂಗನವಾಡಿ ಬಳಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಅಲ್ಲಿನ ಸಾರ್ವಜನಿಕರ ಮಾಹಿತಿ ಮೇರೆಗೆ ಈಗಾಗಲೇ ಅರಣ್ಯ ಇಲಾಖೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪುತ್ತೂರಿನ ಶಾಸಕರು ತಿಳಿಸಿದ್ದು, ಕುಳ ಸಮೀಪದ ಮನೆಗಳಲ್ಲಿ ಆತಂಕ ಸೃಷ್ಟಿಯಾಗಿದೆ ಹಾಗೂ ಚಿರತೆಯ ಕುರಿತು ಆ ಊರಿನ ಜನರು ಜಾಗ್ರತೆ ವಹಿಸಿಕೊಳ್ಳಬೇಕಿದೆ.