ಭಾರತದ ದಿಟ್ಟ ಯೋಧರು ಪಾಪಿ ಪಾಕಿಸ್ತಾನದ ವಿರುದ್ಧ ಹೋರಾಡಿ ಕಾರ್ಗಿಲ್ ಪ್ರದೇಶವನ್ನು ಗೆದ್ದ ಪುಣ್ಯ ದಿನಕ್ಕಿಂದು ಇಪ್ಪತ್ತೈದು ವರ್ಷಗಳ ಸಂಭ್ರಮ. 1999ನೇ ಇಸವಿಯ ಮೇ 3ನೇ ತಾರೀಖಿಗೆ ಪಾಕಿಸ್ತಾನವು ಬರೋಬ್ಬರಿ 5000 ಯೋಧರನ್ನು ಭಾರತದ ಗಡಿ ಪ್ರದೇಶದ ಮೂಲಕ ಕಾರ್ಗಿಲ್ ಗೆ ನುಗ್ಗಿಸಿತ್ತು. ಇದು ಅಂದಿನ ಪಾಕಿಸ್ತಾನದ ಸೇನಾಧಿಕಾರಿ ಪರ್ವೇಜ್ ಮುಷರಫ್ ಅವರು ಮಾಡಿದ ಕುತಂತ್ರದ ಕೆಲಸವಾಗಿತ್ತು. ಆದರೆ ನಮ್ಮ ಭಾರತದ ವೀರಯೋಧರು ಕೈ ಕಟ್ಟಿ ಕೂರಲಿಲ್ಲ. ಕುರಿಗಾಹಿಗಳಿಂದ ವಿಚಾರ ತಿಳಿದು ಭಾರತದ ಗಡಿಯತ್ತ 20000 ಸಾವಿರ ಯೋಧರು ಪಾಕ್ ವಿರುದ್ಧ ದಂಡೆತ್ತಿ ಹೋದರು. ಈ ಕಾರ್ಗಿಲ್ ಯುದ್ಧದಲ್ಲಿ ನಮ್ಮ ದೇಶದ ಸುಮಾರು 700ಕ್ಕೂ ಹೆಚ್ಚಿನ ವೀರ ಪುತ್ರರು ಹುತಾತ್ಮರಾದರು. ಈ ಯೋಧರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಗೌರವಿಸುವ ಸಲುವಾಗಿ ಈ ದಿನವನ್ನು ದೇಶದ ಉದ್ದಗಲಕ್ಕೂ ಕಾರ್ಗಿಲ್ ವಿಜಯ ದಿವಸ್, ಆಪರೇಶನ್ ವಿಜಯ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.
ಈ ಕಾರ್ಗಿಲ್ ಸಮರವು ಭಾರತ ಪಾಕ್ ನಡುವೆ 1999ರ ಮೇ 3ರಿಂದ ಜುಲೈ 26ರವರೆಗೆ ನಡೆದಿತ್ತು. ಇದು ಸಶಸ್ತ್ರ ಯುದ್ಧವಾಗಿದ್ದು ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಯುದ್ಧ ನಡೆಯಿತು. ಪಾಕ್ ಸೈನಿಕರು ಕಾರ್ಗಿಲ್ ನಾ ಎತ್ತರದ ಪ್ರದೇಶದಲ್ಲಿ ಅವಿತುಕೊಂಡು ನಮ್ಮ ಸೈನಿಕರ ಪ್ರತೀ ಚಲನವಲನಗಳನ್ನು ಗಮನಿಸಿ ದಾಳಿ ನಡೆಸುತ್ತಿದ್ದರು. ಕಾರ್ಗಿಲ್ ನ ಕೆಳಭಾಗದಲ್ಲಿ ಇದ್ದ ಭಾರತೀಯ ಪಾಕ್ ಸೇನೆಯ ತೀವ್ರ ದಾಳಿ ಸವಾಲಾಗಿದ್ದರೂ ಎದೆಗುಂದದೆ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆಯೊಂದಿಗೆ ವಾಯುಸೇನೆಯೂ ಜೊತೆಗೂಡಿ ಕಾರ್ಯಾಚರಣೆ ನಡೆಸಿ ಅಲ್ಲಲ್ಲಿ ಅವಿತಿದ್ದ ಪಾಕ್ ಸೇನೆ, ಅರೆಸೇನಾ ಪಡೆಗಳನ್ನು ಹೊಡೆದೋಡಿಸಿತು. ಇದನ್ನು ಆಪರೇಷನ್ ಸಫೇದ್ ಸಾಗರ್ ಎಂದು ಕರೆಯಲಾಗಿದೆ.
ಭಾರತದ ಈ ದಾಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು.
ಪಾಕಿಸ್ತಾನವು ಆಪರೇಷನ್ ಬದ್ರ್ ಎಂಬ ಹೆಸರಿನಲ್ಲಿ ತನ್ನ ಸೇನೆ ಹಾಗೂ ಅರೆಸೇನಾ ತುಕಡಿಗಳನ್ನು ಭಾರತದ ಕಾರ್ಗಿಲ್ ಪ್ರದೇಶದ ಒಳಗೆ ನುಗ್ಗಿಸಿತ್ತು. ನಂತರ ಕಾರ್ಗೀಲ್ ಪ್ರದೇಶವನ್ನು 130ರಿಂದ 200 ಚದರ ಕೀಲೋ ಮೀಟರ್ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಇದರ ಉದ್ದೇಶ ಸಿಯಾಚಿನ್ ಹಾಗೂ ಲಡಾಕ್ ಪ್ರದೇಶದ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿ ಅಲ್ಲಿನ ಜನರನ್ನು ಹಸಿವಿನಿಂದ ಸಾಯಿಸುವುದಾಗಿತ್ತು. ಅಲ್ಲದೆ ವಿವಾದದಲ್ಲಿದ್ದ ಕಾಶ್ಮೀರ ಪ್ರದೇಶಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಭಾರತ ಆ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದಾಗಿತ್ತು. ಆದರೆ ನಿಪುಣ ಭಾರತೀಯ ಯೋಧರು ಯಾವುದನ್ನೂ ಲೆಕ್ಕಿಸದೆ ಕಾರ್ಗಿಲ್ ಎತ್ತರ ಪ್ರದೇಶದಲ್ಲಿದ್ದ ಪಾಕ್ ಸೇನಾ ಬಂಕರ್ಗಳನ್ನೇ ಧ್ವಂಸ ಮಾಡಿದ್ದರು. ಬೋಫೋರ್ಸ್ ಗನ್ ಬಳಸಿ ಪಾಕ್ ಯೋಧರನ್ನು ಹೊಡೆದು ಓಡಿಸಿದರು. ಭಾರತದ ಈ ದಾಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿತ್ತು.
ಇದನ್ನೂ ಓದಿ : ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024
ಜುಲೈ 26ರಂದು ಈ ಯುದ್ಧಭೂಮಿಯಲ್ಲಿ ಸೋತು ಪಾಕಿಸ್ತಾನ ತನ್ನ ಸೋಲೊಪ್ಪಿಕೊಂಡಿತು. ಅವತ್ತೇ ಭಾರತ ಸೇನೆ ಕಾರ್ಗಿಲ್ ಬಿಟ್ಟು ತೊಲಗುವಂತೆ ಪಾಕ್ ಸೇನೆಗೆ ಸೂಚನೆ ನೀಡಿತು. ಅವಿರತ ಸಮರದ ಅಂತಿಮ ಫಲಿತಾಂಶ ಕಾರ್ಗಿಲ್ ಮತ್ತೆ ಭಾರತದ ಆಸ್ತಿಯಾಯಿತು. ಅಂದಿನಿಂದ ಇಂದಿನವರೆಗೂ ಭಾರತದೆಲ್ಲೆಡೆ ಕಾರ್ಗಿಲ್ ವಿಜಯ ದಿನದ ನವಗಾನ ಮಾರ್ದನಿಸುತ್ತಲೇ ಇದೆ.
ಕಾರ್ಗಿಲ್ ಯುದ್ದ ಭಾರತದ ಇತಿಹಾಸದಲ್ಲಿ ಎಂದೆಂದೂ ಅಮರ.
ಕಾರ್ಗಿಲ್ ವಿಜಯಕ್ಕಾಗಿ ಹಲವಾರು ಯೋಧರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿ ಹುತಾತ್ಮರಾಗಿದ್ದಾರೆ. ಕಾರ್ಗಿಲ್ಗಾಗಿ ಪ್ರಾಣ ತೆತ್ತ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಕೀಶಿಂಗ್ ಕ್ಲಿಫರ್ಡ್ ನೋಂಗ್ರಮ್ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಹಾಗೂ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಕಾರ್ಗಿಲ್ ಯುದ್ದ ಭಾರತದ ಇತಿಹಾಸದಲ್ಲಿ ಎಂದೆಂದೂ ಅಮರ. ಪ್ರತಿಯೊಬ್ಬ ಭಾರತೀಯನು ಈ ಯುದ್ಧದ ಬಗ್ಗೆ ತಿಳಿಯಲೇ ಬೇಕು. ಈ ಯುದ್ಧಭೂಮಿಯಲ್ಲಿ ಮಡಿದ ಹೆಮ್ಮೆಯ ಹುತಾತ್ಮರಿಗೆ ನುಡಿ ನಮನ ಸಲ್ಲಿಸಲೇಬೇಕು. ದೇಶಸೇವೆ ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವವರು ನಾವಾಗಬೇಕು.
ಇದನ್ನೂ ಓದಿ : ಕೃಷಿ ನೀರಾವರಿ ಪಂಪ್ಸೆಟ್ಗೆ ಆಧಾರ್ ಲಿಂಕ್..!