ಜಾರಿಯಾಗಲಿದೆ ಏಕೀಕೃತ ಪಿಂಚಣಿ ಯೋಜನೆ

Table of Content

ಜಾರಿಯಾಗಲಿದೆ ಏಕೀಕೃತ ಪಿಂಚಣಿ ಯೋಜನೆ. ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರದ ಖಚಿತ ಪಿಂಚಣಿಗಾಗಿ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2025ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2023ರ ಏಪ್ರಿಲ್ ನಲ್ಲಿ, ಆಗಿನ ಹಣಕಾಸು ಕಾರ್ಯದರ್ಶಿಯಾಗಿದ್ದ ಟಿವಿ ಸೋಮನಾಥನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಗಳ ನಂತರ, ಏಕೀಕೃತ ಪಿಂಚಣಿ ಯೋಜನೆಗೆ ಸಮಿತಿ ಶಿಫಾರಸು ಮಾಡಿದೆ. ಈಗ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದ್ದು, ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

“ನಿಮ್ಮ ಭವಿಷ್ಯಕ್ಕಾಗಿ ಭದ್ರತೆ: ಹೊಸ ಏಕೀಕೃತ ಪಿಂಚಣಿ ಯೋಜನೆ”

ಏಕೀಕೃತ ಪಿಂಚಣಿ ಯೋಜನೆ ಎಂದರೇನು?

ಕೇಂದ್ರ ಸರಕಾರಿ ನೌಕರರಿಗಾಗಿ ಜಾರಿಗೆ ಬಂದಿರುವ ಹೊಸ ಪಿಂಚಣಿ ಯೋಜನೆ ಇದಾಗಿದೆ. ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಯು ರಾಷ್ಟ್ರೀಯ ಪಿಂಚಣಿ ಯೋಜನೆಗಿಂತ (ಎನ್.ಪಿ.ಎಸ್) ಭಿನ್ನವಾಗಿ, ಸರಕಾರಿ ನೌಕರರಿಗೆ ಸ್ಥಿರ ಖಚಿತ ಪಿಂಚಣಿಯ ಅವಕಾಶವಿರುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯ 5 ಮುಖ್ಯ ಅಂಶಗಳು

  1. ನಿಶ್ಚಿತ ಪಿಂಚಣಿ: ಯುಪಿಎಸ್ ಯಲ್ಲಿ ಕನಿಷ್ಠ 25 ವರ್ಷಗಳ ಅರ್ಹ ಸೇವೆಗೆ, ನಿವೃತ್ತಿಗೆ ಮುಂಚಿತವಾಗಿ ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ ಶೇಕಡಾ 50 ರಷ್ಟು ಸ್ಥಿರ ಪಿಂಚಣಿ ಇರುತ್ತದೆ. ಈ ವೇತನ ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಅನುಗುಣವಾಗಿರಬೇಕು.
  2. ಕುಟುಂಬಕ್ಕೆ ಖಚಿತ ಪಿಂಚಣಿ: ಇದು ಖಚಿತ ಕುಟುಂಬ ಪಿಂಚಣಿಯನ್ನು ಸಹ ಹೊಂದಿರುತ್ತದೆ, ಇದು ನೌಕರರು ಪಡೆಯುತ್ತಿದ್ದ ಪಿಂಚಣಿಯ ಶೇಕಡ 60ರಷ್ಟಿರುತ್ತದೆ. ನಿವೃತ್ತರಾದವರು ನಿಧನರಾದ ಸಂದರ್ಭದಲ್ಲಿ ಅದನ್ನು ತಕ್ಷಣವೇ ಕುಟುಂಬಕ್ಕೆ ನೀಡಲಾಗುತ್ತದೆ.
  3. ಖಚಿತ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತಿಯ ಸಂದರ್ಭದಲ್ಲಿ, ಯುಪಿಎಸ್ ಯಲ್ಲಿ ತಿಂಗಳಿಗೆ 10,000 ಖಚಿತ ಕನಿಷ್ಠ ಪಿಂಚಣಿ ಸಿಗಲಿದೆ.
  4. ಹಣದುಬ್ಬರ ಸೂಚ್ಯಂಕ: ಖಚಿತ ಪಿಂಚಣಿ, ಖಚಿತ ಕುಟುಂಬ ಪಿಂಚಣಿ ಮತ್ತು ಖಚಿತ ಕನಿಷ್ಠ ಪಿಂಚಣಿಯ ಮೇಲೆ ಸೂಚ್ಯಂಕದ ಪ್ರಯೋಜನವೂ ದೊರೆಯಲಿದೆ.
  5. ಗ್ರ್ಯಾಚುಯಿಟಿ: ಗ್ರ್ಯಾಚುಯಿಟಿ ಎಂದರೆ ನಿವೃತ್ತಿಯ ಸಮಯದಲ್ಲಿ ದೊರೆಯುವ ಒಂದು ದೊಡ್ಡ ಮೊತ್ತ. ಇದು ಪೂರ್ಣಗೊಂಡ ಪ್ರತಿ ಆರು ತಿಂಗಳ ಸೇವೆಗೆ ನಿವೃತ್ತಿ ದಿನಾಂಕದಂದು ಮಾಸಿಕ ವೇತನದ (ವೇತನ+ತುಟ್ಟಿಭತಭತ್ಯೆ) 1/10 ಆಗಿರುತ್ತದೆ. ಪಾವತಿಯಿಂದ ಖಚಿತ ಪಿಂಚಣಿಯ ಪ್ರಮಾಣ ಕಡಿಮೆಯಾಗುವುದಿಲ್ಲ.

ಯಾರು ಯುಪಿಎಸ್ ಸೇರಬಹುದು?

ಕೇಂದ್ರ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್.ಪಿ.ಎಸ್) ಉಳಿಯಲು ಅಥವಾ ಏಕೀಕೃತ ಪಿಂಚಣಿ ಯೋಜನೆಗೆ (ಯುಪಿಎಸ್) ಸೇರಲು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾರೆ. ಈ ಬಗ್ಗೆ ಮಾಹಿತಿ ನೀಡಿರುವ ಟಿ.ವಿ. ಸೋಮನಾಥನ್, 2004 ರಿಂದ ಎನ್‌ಪಿಎಸ್ ಹೊಂದಿರುವ ಈಗಾಗಲೇ ನಿವೃತ್ತರಾದ ಎಲ್ಲರಿಗೂ ಯುಪಿಎಸ್ ಅನ್ವಯಿಸುತ್ತದೆ ಎಂದು ಹೇಳಿದರು. ಹೊಸ ಯೋಜನೆ ಏಪ್ರಿಲ್ 1 2025 ರಿಂದ ಜಾರಿಗೆ ಬಂದರೂ, ಎನ್ ಪಿ ಎಸ್ ಪ್ರಾರಂಭವಾದ ಸಮಯದಿಂದ ನಿವೃತ್ತರಾದ ಪ್ರತಿಯೊಬ್ಬರು ಮತ್ತು ಮಾರ್ಚ್ 31,2025 ರವರೆಗೆ ನಿವೃತ್ತರಾಗುವವರೂ, ಈ ಯೋಜನೆಯ ಎಲ್ಲಾ ಐದು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ ಎಂದರು.

ಯು.ಪಿ.ಎಸ್ v/s ಎನ್.ಪಿ.ಎಸ್

2004ರ ಜನವರಿಯಲ್ಲಿ ಪರಿಚಯಿಸಲಾದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಮೂಲತಃ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಾದ ಸರ್ಕಾರಿ ಪ್ರಾ‌ಯೋಜಿತ ನಿವೃತ್ತಿ ಯೋಜನೆಯಾಗಿತ್ತು. ಬಳಿಕ, 2009ರಲ್ಲಿ, ಇದನ್ನು ಇತರ ಎಲ್ಲಾ ವಲಯಗಳಿಗೂ ಅನ್ವಯವಾಗುವಂತೆ ವಿಸ್ತರಿಸಲಾಯಿತು. ಎನ್.ಪಿ.ಎಸ್ ಅನ್ನು ಸರ್ಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಟಿ.ಎಫ್.ಆರ್.ಡಿ.ಎ) ಜಂಟಿಯಾಗಿ ನಿರ್ವಹಿಸುತ್ತದೆ ಮತ್ತು ಇದನ್ನು ನಿವೃತ್ತಿಗೆ ಅನುಗುಣವಾಗಿ ಧೀರ್ಘವಧಿಯ, ಸ್ವಯಂ ಪ್ರೇರಿತ ಹೂಡಿಕೆ ಯೋಜನೆಯಾಗಿ ವಿನ್ಯಾಸಗೊಳಿಸಲಾಗಿದೆ. ಎನ್.ಪಿ.ಎಸ್ ಗಣನೀಯ ಹೂಡಿಕೆ ಲಾಭದ ಸಾಧ್ಯತೆಯೊಂದಿಗೆ ಪಿಂಚಣಿಯನ್ನು ಖಚಿತಪಡಿಸುತ್ತದೆ. ನಿವೃತ್ತಿಯ ನಂತರ, ನೌಕರರು ತಮ್ಮ ಹೂಡಿಕೆಯ ಒಂದು ಭಾಗವನ್ನು ಹಿಂಪಡೆಯುವ ಆಯ್ಕೆ ಹೊಂದಿರುತ್ತಾರೆ, ಉಳಿದ ಮೊತ್ತವನ್ನು ಮಾಸಿಕ ಆದಾಯವಾಗಿ ವಿತರಿಸಲಾಗುತ್ತದೆ. ಈ ಯೋಜನೆ ನಿವೃತ್ತಿಯ ನಂತರ ಖಚಿತ ಆದಾಯ ಒದಗಿಸುತ್ತದೆ.

ಆಗಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಎನ್.ಪಿ.ಎಸ್ 2 ಹಂತಗಳಾಗಿ ವಿಂಗಡಣೆ

ಶ್ರೇಣಿ 1 ಖಾತೆ ಮತ್ತು ಶ್ರೇಣಿ 2 ಖಾತೆ. ಶ್ರೇಣಿ 1 ಖಾತೆಯನ್ನು ಆಯ್ಕೆ ಮಾಡಿಕೊಳ್ಳುವವರು ನಿವೃತ್ತರಾದ ನಂತರವೇ ಹಣ ಹಿಂಪಡೆಯುವುದು, ಆದರೆ ಶ್ರೇಣಿ 2 ಖಾತೆಗಳು ಮುಂಚಿತವಾಗಿ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡುತ್ತವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿಸಿಡಿ ಅಡಿಯಲ್ಲಿ, ಎನ್.ಪಿ.ಎಸ್ ನಲ್ಲಿ ಹೂಡಿಕೆ ಮಾಡುವುದರಿಂದ 1.5ಲಕ್ಷ ರೂ.ವರೆಗಿನ ಮೊತ್ತ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಎನ್.ಪಿ.ಎಸ್ ಕಾರ್ಪಸ್ ನಾ ಶೇ.60 ರಷ್ಟನ್ನು ಹಿಂಪಡೆಯುವುದು ರಿಂದ ಅದು ತೆರಿಗೆ ಮುಕ್ತವಾಗಿರುತ್ತದೆ.

ಒ.ಪಿ.ಎಸ್ ಗಿಂತ ಎನ್.ಪಿ.ಎಸ್ ಹೇಗೆ ಭಿನ್ನ?

ಡಿಫೈನ್ಡ್ ಬೆನಿಫಿಟ್ ಪಿಂಚಣಿ ವ್ಯವಸ್ಥೆ (ಡಿಬಿಪಿಎಸ್) ಎಂದು ಕರೆಯಲಾಗುವ ಹಳೆಯ ಪಿಂಚಣಿ ಯೋಜನೆ (ಒ.ಪಿ.ಎಸ್) ನೌಕರನು ಪಡೆದ ಕೊನೆಯ ವೇತನವನ್ನು ಆಧರಿಸಿತ್ತು. ಎನ್.ಪಿ‌.ಎಸ್ ಅನ್ನು ಡಿಫೈನ್ಡ್ ಕಾಂಟ್ರಿಬ್ಯೂಷನ್ ಪಿಂಚಣಿ ವ್ಯವಸ್ಥೆ (ಡಿಸಿಪಿಎಸ್) ಎಂದು ಕರೆಯಲಾಗುತ್ತದೆ. ಇದರಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ಮಾನದಂಡಗಳ ಪ್ರಕಾರ ನಿವೃತ್ತಿಯ ಸಮಯದಲ್ಲಿ ಪಾವತಿಸಬೇಕಾದ ಪಿಂಚಣಿ ಸಂಪತ್ತನ್ನು ಕ್ರೋಢೀಕರಿಸಲು ಕೊಡುಗೆ ನೀಡುತ್ತಾರೆ. ಏಕೀಕೃತ ಪಿಂಚಣಿ ಯೋಜನೆ ಅಥವಾ ಯುಪಿಎಸ್ ಯಲ್ಲಿ, ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್.ಪಿ.ಎಸ್) ಗಿಂತ ಭಿನ್ನವಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಸ್ಥಿರ ಖಚಿತ ಪಿಂಚಣಿಯ ಅವಕಾಶವಿರುತ್ತದೆ. ಇದು ನೌಕರರಿಗೂ ಸಹಾಯಕವಾಗಲಿದೆ‌.ಜಾರಿಯಾಗಲಿದೆ ಏಕೀಕೃತ ಪಿಂಚಣಿ ಯೋಜನೆ.

ವಿಶ್ವದ ಟಾಪ್ 100 ಐಸ್ಕ್ರೀಮ್ ಪಟ್ಟಿಯಲ್ಲಿ ಮಂಗಳೂರು ಪಬ್ಬಾಸ್ ಐಸ್ಕ್ರೀಮ್

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x