ಭಾರತೀಯ ಸೇನೆಗೆ ನೀಯೋಜನೆಗೊಂಡ “ಅರಿಘಾತ್”

Table of Content

ದೇಶದ ಎರಡನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (ಎಸ್.ಎಸ್.ಬಿ.ಎನ್) ಐಎನ್ಎಸ್ ಅರಿಘಾತ್ ಅಥವಾ ಎಸ್-3 ಅನ್ನು ಅಧಿಕೃತವಾಗಿ ವಿಶಾಖಪಟ್ಟಣಂ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶ ರಕ್ಷಣೆಗಾಗಿ ನಿಯೋಜನೆಗೊಳಿಸಿದ್ದಾರೆ. ಇದರಿಂದಾಗಿ ಭಾರತೀಯ ನೌಕಾಪಡೆಗೆ ಆನೆಬಲ ಸಿಕ್ಕಂತಾಗಿದೆ. ಐಎನ್ಎಸ್ ಅರಿಘಾತ್ ಲೋಕಾರ್ಪಣೆಯೊಂದಿಗೆ, ಭಾರತ ಈಗ ಎರಡು ಕಾರ್ಯಾಚರಣೆಯ ಎಸ್‌ಎಸ್‌ಬಿಎನ್ ಗಳನ್ನು ಹೊಂದಿದೆ. ಈ ಮಾದರಿಯ ಮೊದಲ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಅನ್ನು ಆಗಸ್ಟ್ 2016ರಲ್ಲಿ ಸೇವೆಗೆ ನಿಯೋಜಿಸಲಾಗಿತ್ತು ಯ. ಇದರ ವಿಶೇಷತೆಗಳು, ಭಾರತೀಯ ನೌಕಾಪಡೆಗೆ ಯಾವ ರೀತಿ ಗೇಮ್ ಚೇಂಜರ್ ಆಗಿ ಇದು ಕರ್ತವ್ಯ ನಿರ್ವಹಿಸಬಹುದು ಎಂಬುದರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.

ಏನಿದು ಐಎನ್ಎಸ್ ಅರಿಘಾತ್?

ಸಂಸ್ಕೃತ ಭಾಷೆಯಲ್ಲಿ ಅರಿಘಾತ್ ಎಂದರೆ ಶತ್ರುಗಳನ್ನು ನಾಶಪಡಿಸುವುದು ಎಂದರ್ಥ. ಇದು ಅರಿಹಂತ್ ವರ್ಗದ ಎರಡನೇ ಜಲಾಂತರ್ಗಾಮಿಯಾಗಿದ್ದು, 2017ರಿಂದಲೇ ವಿಶಾಖಪಟ್ಟಣಂ ನ ಹಡಗು ನಿರ್ಮಾಣ ಕೇಂದ್ರದಲ್ಲಿ (ಎಸ್.ಬಿ.ಸಿ) ನಿರ್ಮಾಣ ಹಂತದಲ್ಲಿತ್ತು.

ಅರಿಘಾತ್ ನೌಕೆಯ ವಿಷೇಶತೆಗಳೇನು?

ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗೆ ಹೋಲಿಸಿದರೆ, ಐಎನ್ಎಸ್ ಅರಿಘಾತ್ 83 ಮೆಗಾ ವ್ಯಾಟ್ ಒತ್ತಡದ ಲಘು-ನೀರಿನ ರಿಯಾಕ್ಟರ್ ಗಳಿಂದ ಚಾಲಿತವಾಗಿದ್ದು, ತಿಂಗಳುಗಳವರೆಗೆ ನೀರಿನಾಳದಲ್ಲಿ ಇರುವ ಸಾಮರ್ಥ್ಯವಿದೆ. ಜಲಾಂತರ್ಗಾಮಿ ನೌಕೆಯ ತೂಕ 6,000 ಟನ್ಗಳಾದರೆ ಉದ್ದ 112 ಮೀಟರ್. ಐಎನ್ಎಸ್ ಅರಿಘಾತ್ ನೀರಿನ ಮೇಲ್ಮೈಯಲ್ಲಿ 12-15 ನಾಟ್ (ಗಂಟೆಗೆ 22 ರಿಂದ 28 ಕಿಲೋಮೀಟರ್) ಕನಿಷ್ಠ ವೇಗವನ್ನು ತಲುಪಬಹುದು. ಮತ್ತು ನೀರಿನಾಳದಲ್ಲಿ 24 ನಾಟ್ (ಗಂಟೆಗೆ 44 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲದು. ಡಬಲ್ ಹಲ್, ಬ್ಯಾಲಸ್ಟ್ ಟ್ಯಾಂಕ್ಗಳು, ಎರಡು ಸ್ಟ್ಯಾಂಡ್ ಬೈ ಸಹಾಯಕ ಎಂಜಿನ್ ಗಳು ಮತ್ತು ತುರ್ತು ಶಕ್ತಿ ಮತ್ತು ಚಲನಶೀಲತೆಗಾಗಿ ಪೂರಕ ಥ್ರಸ್ಟರನ್ನು ಸಹ ಹೊಂದಿದೆ.

ಗೇಮ್ ಚೇಂಜರ್ ಎಂದೇ ಕರೆಯಲ್ಪಡುವ ಅರಿಘಾತ್

ಸ್ಟೆಲ್ತ್ ಸಾಮರ್ಥ್ಯಗಳಿಂದಾಗಿ, ಐಎನ್ಎಸ್ ಅರಿಘಾತ್ ಅನ್ನೋ ಗೇಮ್ ಚೇಂಜರ್ ಎಂದು ಅನೇಕ ತಜ್ಞರು ಅಭಿಪ್ರಾಯಪಡುತ್ತಾರೆ. ಸುಧಾರಿತ ಸೋನಾರ್ ವ್ಯವಸ್ಥೆಗಳು, ಶಾಂತ ಪ್ರೊಪಲ್ಷನ್ ಮತ್ತು ಅತ್ಯಾಧುನಿಕ ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿದ ಐಎನ್ಎಸ್ ಅರಿಘಾತ್, ಯಾವುದೇ ಅಪಾಯಕ್ಕೆ ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಬಲ್ಲದು. ಇದು ಆಧುನಿಕ ನೌಕಾ ಕಾರ್ಯಾಚರಣೆಗಳ ಪ್ರಮುಖ ಅಂಶವಾದ ನಿಖರತೆ ಮತ್ತು ಗೌಪ್ಯತೆಯೊಂದಿಗೆ ತನ್ನ ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲದು.

ಐಎನ್ಎಸ್ ಅರಿಘಾತ್ ನಾಲ್ಕು ಪರಮಾಣು ಸಾಮರ್ಥ್ಯದ -4, ಸುಮಾರು 3,500 ಕಿಲೋ ಮೀಟರ್ ವ್ಯಾಪ್ತಿಯ ಎಸ್.ಎಲ್.ಬಿ.ಎಂ ಗಳನ್ನು (ಜಲಾಂತರ್ಗಾಮಿ ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು) ಅಥವಾ ಸುಮಾರು 750 ಕಿಲೋ ಮೀಟರ್ ವ್ಯಾಪ್ತಿಯ 12 ಕೆ-15 ಎಸ್.ಎಲ್.ಬಿ.ಎಂ ಗಳನ್ನು ಹೊಂದಿರುತ್ತದೆ. ಇದಕ್ಕೆ ಪರಮಾಣು ಸಿಡಿತಲೆಗಳಿರುವ ಕೆ-15 ಕ್ಷಿಪಣಿಗಳನ್ನು ಅಳವಡಿಸಬಹುದು. ಇದರ ದೋಣಿಯು ಹೆಚ್ಚು ಸಮರ್ಥವಾಗಿದೆ ಮತ್ತು ರಹಸ್ಯವಾಗಿದೆ.

ಐಎನ್ಎಸ್ ಅರಿಘಾತ್ ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ವಿಶೇಷ ಕಾರ್ಯಾಚರಣೆಗಳಿಗೂ ಉಪಯುಕ್ತವಾಗಿದೆ. ಇದು ಭಾರತದ ಕಡಲ ಕ್ಷೇತ್ರವನ್ನು ಅರಿಯುವ ಜೊತೆಗೆ ಹೊಸ ಬೆದರಿಕೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆ ಮೂಲಕ ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆಗೆ ಕೊಡುಗೆ ನೀಡುತ್ತದೆ.

ಐಎನ್ಎಸ್ ಅರಿಘಾತ್ ನೊಂದಿಗೆ, ಭಾರತ ಇಂಡೋ-ಪೆಸಿಫಿಕ್ ದೇಶದಲ್ಲಿ ಎರಡು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಐ.ಎನ್.ಎಸ್ ಅರಿಘಾತ್ ಬೃಹತ್ ಕಾರ್ಯತಂತ್ರಕ್ಕೆ ಸಹಾಯ ಮಾಡಲಿದೆ. ಈ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವ ಯಾವುದೇ ನೌಕಾಪಡೆಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ತಜ್ಞರು ಹೇಳುತ್ತಾರೆ. ಚೀನಾ ಕಾನೂನುಬಾಹಿರವಾಗಿ ಕಡಲಿನ ಮೇಲೆ ತನ್ನ ಹಕ್ಕು ಸ್ಥಾಪಿಸಲು ಹೊರಟಿರುವ ಹಿನ್ನೆಲೆಯಲ್ಲಿ ಭಾರತದ ಬಲವರ್ಧನೆ ನಿರ್ಣಾಯಕವಾಗಿದೆ ಎಂಬುದು ಎಲ್ಲರ ಅಭಿಪ್ರಾಯ.

ಎಲೈಟ್ ಕ್ಲಬ್ ಗೆ ಭಾರತ

ಭಾರತವು ಈಗ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಸೇರಿದೆ. ಪ್ರಸ್ತುತ, ಕೇವಲ ಆರು ದೇಶಗಳು ಯುಎಸ್, ರಷ್ಯಾ, ಯುಕೆ, ಫ್ರಾನ್ಸ್, ಚೀನಾ ಮತ್ತು ಭಾರತ ಈ ಎಲೈಟ್ ಕ್ಲಬ್ ನ ಭಾಗವಾಗಿದೆ, ಇದಲ್ಲದೆ ಭೂಮಿ, ವಾಯು ಮತ್ತು ನೀರಿನೊಳಗೆ ಪರಮಾಣು ಶಸ್ತ್ರಾಸ್ತ್ರವನ್ನು ಉಡಾಯಿಸುವ ಸಾಮರ್ಥ್ಯ ಹೊಂದಿರುವ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಅಮೆರಿಕ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ಈ ಸಾಮರ್ಥ್ಯವನ್ನು ಹೊಂದಿದೆ.

ರಕ್ಷಣಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಭಾರತದ ಜಲಾಂತರ್ಗಾಮಿ ಯೋಜನೆ

ಐಎನ್ಎಸ್ ಅರಿಘಾತ್ ಭಾರತದ ಅರಿಹಂತ್ ಜಲಾಂತರ್ಗಾಮಿ ಯೋಜನೆಯ ಭಾಗವಾಗಿದ್ದು, ಇದನ್ನು 900 ಶತಕೋಟಿ ರೂಪಾಯಿ (12 ಶತಕೋಟಿ ಡಾಲರ್) ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತ ದೊಡ್ಡ ಗಾತ್ರದೊಂದಿಗೆ, ಏಳು ಸಾವಿರ ಟನ್ ತೂಕದ ಇನ್ನೂ ಎರಡು ಎಸ್.ಎಸ್.ಬಿ.ಎನ್ ಗಳನ್ನು ಹೊಂದುವ ಯೋಚನೆಯಲ್ಲಿದೆ. ಮೂಲಗಳ ಪ್ರಕಾರ, ಮೂರನೆಯ, ಐಎನ್ಎಸ್ ಅರಿದಾಮನ್ ಅಥವಾ ಎಸ್4 ಅನ್ನು ಮುಂದಿನ ವರ್ಷ ನಿಯೋಜಿಸಲಾಗುವುದು. ಸ್ವಲ್ಪ ಸಮಯದ ನಂತರ ಎಸ್-4 ಎಂಬ ಕೋಡ್ ವರ್ಡ್ ಹೊಂದಿರುವ ನಾಲ್ಕನೇ ಎಸ್.ಎಸ್.ಬಿ.ಎನ್ ಅನ್ನು ನಿಯೋಜಿಸಲಾಗುತ್ತದೆ. ವರದಿಯ ಪ್ರಕಾರ, ಇವೆರಡೂ ನಾಲ್ಕು ಕ್ಷಿಪಣಿ ಕೊಳವೆಗಳ ಬದಲಿಗೆ ಎಂಟು ಕ್ಷಿಪಣಿ ಕೊಳವೆಗಳನ್ನು ಹೊಂದಿರುತ್ತವೆ.

”ಸಮುದ್ರವನ್ನು ನಿಯಂತ್ರಿಸುವವನು ರಾಷ್ಟ್ರಗಳ ಹಣೆಬರಹವನ್ನು ನಿಯಂತ್ರಿಸುತ್ತಾನೆ” ಎಂಬ ಮಾತಿನಂತೆ, ಅರಿಘಾತ್ ರಕ್ಷಣಾ ನೌಕೆಯು ಭಾರತದ ಮುಂದಿನ ಪೀಳಿಗೆಗೆ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಸಾಗರದ ಮೇಲಿನ ಕಾವಲುಗಾರನಾಗಿರಲಿ ಎಂಬುದೇ ಎಲ್ಲರ ಆಶಯ.

ಜಿಲ್ಲೆಗೊಂದು ಮಾದರಿ ಸೌರ ಗ್ರಾಮ

Tags :
Subscribe
Notify of
guest
0 Comments
Inline Feedbacks
View all comments

Bharathavani News Desk

Bharathavani is a prominent Kannada news portal based in Puttur, Karnataka, dedicated to delivering comprehensive coverage of local, state, national, and international news.

ಇನ್ನಷ್ಟು ಸುದ್ದಿಗಳು

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

ಇತ್ತೀಚಿನಸುದ್ದಿ

ಇನ್ನೊ ಓದಿ

ಭಾರಧ್ವಾಜಾಶ್ರಮ : ವೇದಾಧ್ಯಯನಕ್ಕೊಂದು ಗುರುಕುಲ..

By Balu Deraje  ಭಾರತದ ಪ್ರಾಚೀನ ಹಿಂದು ಧರ್ಮದ ಸಾಹಿತ್ಯ ಎಂದರೆ ವೇದಗಳು ಎಂದು ಪರಿಗಣಿಸಲಾಗಿದೆ. ಇದು ಸಂಸ್ಕೃತ ದಲ್ಲಿ ರಚಿಸಲ್ಪಟ್ಟಿದೆ. ಈ ವೇದಗಳನ್ನು ವ್ಯಾಸ ಮಹರ್ಷಿಗಳು ಪಠ್ಯ ರೂಪದಲ್ಲಿ 4 ವಿಭಾಗಗಳಾಗಿ ವಿಂಗಡಿಸಿ ಇವರ ನಾಲ್ಕು ಶಿಷ್ಯರಾದವರು 1: ಋಗ್ವೇದವನ್ನು ಪೈಲ ಮಹರ್ಷಿ, 2: ಯಜುರ್ವೇದ ವನ್ನು ವೈಶಂಪಾಯನ ಮಹರ್ಷಿ, 3:ಸಾಮವೇದ ವನ್ನು ಜೈಮಿನಿ ಮಹರ್ಷಿ, 4: ಅಥರ್ವಣ ವೇದವನ್ನು ಸುಮಂತ ಮಹರ್ಷಿ ಗಳು ಪ್ರಚಾರ ಮಾಡಿದರು. ನಂತರ ಗುರುಕುಲ ಪದ್ದತಿಯು ಆರಂಭಗೊಂಡಿತು ಎಂದು ಉಲ್ಲೇಖವಿದೆ.. ನಾಡಿನ...
suvarna vidhana soudha, belgaum, legislative building

ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ 12 ರಂದು ಉಪಚುನಾವಣೆ

ಜುಲೈ 12ರಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಕರ್ನಾಟಕ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 25 ರಂದು ಉಪಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ. ಜುಲೈ 3 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 5 ಕೊನೆಯ ದಿನವಾಗಿದೆ. ಜುಲೈ 12 ರಂದು ಸಂಜೆ 5 ಗಂಟೆಗೆ ಮತ...
arrows, tendency, businesswoman

ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಫಿಚ್ ರೇಟಿಂಗ್ಸ್

ಜಾಗತಿಕ ರೇಟಿಂಗ್ ಏಜೆನ್ಸಿಯಾದ ಫಿಚ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ 2024-25ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 7.2ರಷ್ಟು ಹೆಚ್ಚಾಗಬಹುದು. ಈ ಹಿಂದೆ ಮಾಡಿದ ಅಂದಾಜಿನಲ್ಲಿ ಶೇ. 7ರಷ್ಟು ಜಿಡಿಪಿ ಹೆಚ್ಚಬಹುದು ಎಂದು ಅದು ಅಭಿಪ್ರಾಯಪಟ್ಟಿತ್ತು. ಈಗ 20 ಮೂಲಾಂಕಗಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೂಡಿಕೆಗಳು ಹೆಚ್ಚುತ್ತಿರುವುದು, ಗ್ರಾಹಕರ ವಿಶ್ವಾಸ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಫಿಚ್ ರೇಟಿಂಗ್ಸ್​ನ ಅನಿಸಿಕೆಯಾಗಿದೆ.
cricket, sports, athlete

200 ಸಿಕ್ಸರ್‌ ಪೂರ್ಣಗೊಳಿಸಿ ವಿಶ್ವ ದಾಖಲೆ ಬರೆದ ರೋಹಿತ್‌ ಶರ್ಮಾ

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ದದ ತಮ್ಮ ಕೊನೆಯ ಸೂಪರ್‌-8ರ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ ಹಾಗೂ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್‌ 1. ರೋಹಿತ್‌ ಶರ್ಮಾ-157 ಪಂದ್ಯಗಳಿಂದ 203 ಸಿಕ್ಸರ್‌2. ಮಾರ್ಟಿನ್‌ ಗಪ್ಟಿಲ್‌-122 ಪಂದ್ಯಗಳಿಂದ 173 ಸಿಕ್ಸರ್‌3. ಜೋಸ್‌ ಬಟ್ಲರ್‌- 123 ಪಂದ್ಯಗಳಿಂದ 137 ಸಿಕ್ಸರ್‌4. ಗ್ಲೆನ್‌ ಮ್ಯಾಕ್ಸ್‌ವೆಲ್‌-113 ಪಂದ್ಯಗಳಿಂದ 133...

Get in Touch

ಧನಾತ್ಮಕ ಪತ್ರಿಕೋದ್ಯಮಕ್ಕೆ ಬೆಂಬಲ ನೀಡಿ

ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ ಹಾಗೂ ನಮ್ಮ ಈ ಪ್ರಯತ್ನದಲ್ಲಿ ನೀವೂ ಭಾಗಿದಾರರಾಗಿ

Technology Partner

© Copyright 2024 – All Rights reserved

0
Would love your thoughts, please comment.x
()
x